Govt. of Karnataka - HR & CE Department
ಕರ್ನಾಟಕ ಸರಕಾರ - ಧಾರ್ಮಿಕ ಧತ್ತಿ ಇಲಾಖೆ
Phone : +91 9480 757 516      Email : info@mrutyunjayeshwaratemple.com

Sthotras

ಜಯ ಮೃತ್ಯುಂಜಯ

  ದೇವಗೆ ಪೊಡ ಮಡುವೆ ಮೃತ್ಯುಂಜಯೇಶಗೆ ನಾ ಮಣಿವೆ   ಜಯ ಜಯ ಜಯ ಜಯ ಜಯ ಜಯ ಜಯ ಜಯ ಜಯ ಮೃತ್ಯುಂಜಯಗೆ   ಲೋಕೋದ್ಧಾರಗೆ ಶರಣವೆಂಬೆ ಭಕ್ತರ ಪೊರೆಯೋ ಎಂದೆಂಬೆ ||ಜಯ||   ದುಃಖವ ನೀಗುತಿರು ಮನಕೆ ನೆಮ್ಮದಿ ನೀಡುತಿರು   ||ಜಯ||   ಸುಗುಣವ ಕೊಡು ಇಂದು ಮನುಜಗೆ ಸಮರಸವಿರಲೆಂದು ||ಜಯ||   ಐಕ್ಯತೆ ನಮಗಿರಲಿ ಎಂದಿಗು ಸೌಖ್ಯದ ಬದುಕಿರಲಿ ||ಜಯ||   ಧರ್ಮವು ಹೊಳೆದಿರಲಿ ನಿತ್ಯವು ಕರ್ಮವು ನೆನಪಿರಲಿ   ||ಜಯ||

Read More

ನಿನ್ನ ನಂಬಿಹೆ ನಾನು

  ನಿನ್ನ ನಂಬಿಹೆ ನಾನು ಹೇ ಮೃತ್ಯುಂಜಯನೆ ಸನ್ಮಾರ್ಗ ತೋರೋ ಹೇ ರಕ್ಷಕನೆ       ||ಪ||   ಭವ ಸಾಗರದ ಸುಖ ದುಃಖದಲೆಗಳಲಿ ತೇಲುತೇರಿಳಿಯತ ಸಾಗೋ ಶಕ್ತಿಯನು ಕೊಡು ಎನಗೆ   ಸಂಸಾರ ಸೆರೆಯ ಸಿರಿ ಸಂಪದದ ಈ ಬದುಕ ಸಮ ಭಾವದಿ ಸ್ವೀಕರಿಸಿ ಬಾಳುವ ಮನವೆನಗೆ ನೀಡೋ   ಮದ ಮತ್ಸರ ಮೋಹಾದಿ ಇಹ ಬಂಧನದಿ ಎದುರಾಗುವ ತಡೆಗಳನು ಮುದದಿಂದ ಹರಿಸೋ ಹೇ ನೀಲಕಂಠ   ಋಣ ರೋಗದಿ ದಾರಿದ್ರ್ಯ ರಾಗ ದ್ವೇಷಗಳಿಂದ ಭಗ್ನವಾಗದೆ ತಪವು ಭಂಗವಾಗದಿರಲೆನ್ನ […]

Read More

ಶರಣು ಮೃತ್ಯುಂಜಯೇಶ್ವರ

  ಶರಣು ಶರಣು ಹೇ ಮೃತ್ಯುಂಜಯೇಶ್ವರ ಭಕ್ತರ ರಕ್ಷಕ ಮೃತ್ಯುಂಜಯ   ದು:ಖವ ನೀಗೋ ಹೇ ಭಗವಂತ ದುರಿತವ ಹರಿಸೋ ಪರಶಿವನೆ ಶಿಷ್ಟರ ರಕ್ಷಕ ದುಷ್ಟರ ಶಿಕ್ಷಕ ಇಷ್ಟವ ನೀಡೋ ಹೇ ದೇವ   ದೇವ ದೇವ ಹೇ ದೇವ ದೇವ ಹೇ ದೇವ ದೇವ ಹೇ ಮಹದೇವ ಭಾವವು ತುಂಬಿ ಭಜಿಸುವೆವು ಭವ ಸಾಗರ ದಾಟಿಸು ಮುದದಿಂದ   ಜಯತು ಜಯತು ಹೇ ಜಯತು ಜಯತು ಹೇ ಜಯತು ಜಯತ ಹೇ ಮೃತ್ಯುಂಜಯ   ಜಯ […]

Read More

ನಮೋ ಮೃತ್ಯುಂಜಯ

  ಮೃತ್ಯುಂಜಯ ನಮಸ್ತುಭ್ಯಂ ಮೃತ್ಯುಂ ಹರ ನಮಾಮ್ಯಹಂ | ಸರ್ವ ಮೃತ್ಯು ವಿನಾಶಾಯ ಮೃತ್ಯುಂಜಯ ನಮೋ ನಮಃ1 || ಕೈಲಾಸ ಪತಿಯೆ ಪರಶಿವನೆ ಹಾಲಹಲವುಂಡ ವಿಷಧರನೆ ನಮೋ ನಮೋ ಶ್ರೀ ಮೃತ್ಯುಂಜಯನೆ ನಮೋ ನಮೋ ಹೇ ರಕ್ಷಕನೆ   ಗಂಗೆಯ ಧರಿಸಿದ ಗಂಗಾಧರನೆ ನಂದಿಯ ವಾಹಕ ನಂದೀಶನೆ ನಮೋ ನಮೋ ಹೇ ಮೃತ್ಯುಂಜಯನೆ ನಮೋ ನಮೋ ಹೇ ರಕ್ಷಕನೆ   ತ್ರಿಶೂಲಧಾರಿ ತ್ರಿನೇತ್ರಿಯ ರುದ್ರತಾಂಡವನೆ ಶಿವ ಶಂಭೋ ನಮೋ ನಮೋ ಹೇ ಮೃತ್ಯುಂಜಯನೆ ನಮೋ ನಮೋ ಹೇ […]

Read More

ಶ್ರೀ ಮೃತ್ಯುಂಜಯೇಶ್ವರ

  ಮೃತ್ಯುಂಜಯನೆ ನೀನೆಮ್ಮ ನಿತ್ಯವು ಕಾಯೋ ಭಗವಂತ   ||ಪ||   ಪುತ್ತೂರ ನರಿಮೊಗರಿನಲಿ ಎತ್ತರ ಕ್ಷೇತ್ರದಿ ನೆಲೆನಿಂತು ಸುತ್ತಲ ಹಸಿರಿನ ಉಸಿರಲಿ ಸುತ್ತುತ ಸಲಹೋ ಭಗವಂತ   ಪುರಾಣದ ಕಥೆಯು ಇಂತಿಹುದು ಖರಾಸುರನೆಂಬ ದಾನವನು ಹರ ನಿನ್ನನು ಕುರಿತು ತಪಗೈದು ವರವನು ಪಡೆದನು ಮುದದಿಂದ   ಮೃತ್ಯುಂಜಯನೆ ನೀನೊಲಿದು ಭೃತ್ಯನ ಹರಸಿದೆ ನೀನಂದು ನೃತ್ಯವನಾಡಿ ನಟರಾಜ ಮೃತ್ಯುಂಜಯ ನೀ ನೆಲೆಯಾದೆ   ಹರಸಲು ಹರನು ಕ್ಷಣದಲ್ಲಿ ಧರಿಸುತ ಅಸುರನು ಜಿಹ್ಹೆಯಲ್ಲಿ ಇರಿಸಿದ ಲಿಂಗವ ಭುವಿಯಲ್ಲಿ ಮೆರೆದಿಹ ಕ್ಷೇತ್ರದ […]

Read More